2011ರಲ್ಲಿ ಆರಂಭವಾಗಿದ್ದ ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹರಿಹರನ್ ಅವರು, ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರು ಹೌದು.
ವೃತ್ತಿ ಮಾಡುತ್ತಿದ್ದ ಸಮಯದಿಂದಲೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಸ್ನೇಹಾಲಯ ಅನಾಥಾಶ್ರಮದ ಟ್ರಸ್ಟಿಯಾಗಿದ್ದಾರೆ. ಅನಾಥ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ವಸತಿ ಸೌಲಭ್ಯ ಒದಗಿಸುತ್ತಿದ್ದಾರೆ.
ಅಪರಾಧ ಮಾಡಿ ಜೈಲು ಪಾಲಾಗುವ ಮಕ್ಕಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಇವರು ಅಂತಹ ಮಕ್ಕಳಿಗಾಗಿ ಇರುವ ‘ಸೋ ಕೇರ್’ ಆಶ್ರಮದ ಸದಸ್ಯರಾಗಿದ್ದು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ.
Join hands to make an impact